ಬುಧವಾರ, ಆಗಸ್ಟ್ 22, 2012

ವರುಷ ಅರ್ಧ ಕಳೆಯಿತು

ಅರೇ ... ವರುಷ ಅರ್ಧ ಕಳೆಯಿತು ನನ್ನ ಮರುಭೂಮಿ ಬದುಕು  ಎಂಬ ಏಕಾಂತ ಬ್ಲಾಗಿಗೆ..,
 ಹೌದು ಇದು ನನ್ನ  ಏಕಾಂತ ಬ್ಲಾಗ್ .
ನಾನಿಲ್ಲಿ  ಬರೆದದ್ದೇ  ಬರಹ , ಗೀಚಿದ್ದೇ ಕವನ..,  ಅದು ಓದಿದಾಗ ಹುಟ್ಟಿದ್ದೇ  ಹಾಸ್ಯ
ತಿದ್ದಲ್ಲೂ  ತೀಡಲ್ಲು ಯಾರು ಇಲ್ಲ .., ಒಬ್ಬನ್ನೇ ಒಬ್ಬ ಬ್ಲಾಗ್ follower ಇಲ್ಲ .., ಅಂದ ಮೇಲೆ ಪ್ರೋತ್ಸಾಹದ ಮಾತೆಲ್ಲಿ, ಕಮೆಂಟ್ ಉಳಿಯಿತು ದೂರದಲ್ಲಿ, ಪ್ರಿಯ ಮಡದಿಯನ್ನು  ಬಿಟ್ಟು ಬೇರೆ ಓದುಗರೇ ಇಲ್ಲ....

ಮತ್ತೆ ಬರೆಯುವೆನು ನಾನು.., ಬರೆಯಲು ಹಿತವಿರುವತನಕ.., ಇದು ನನ್ನ ಜೀವದ ಗೆಳೆಯ ನೀನಿಲ್ಲದಿದ್ದರೆ ನನಗೆ ಬದುಕು ಮರುಭೂಮಿಯಲ್ಲಿ  ಏಕಾಂತ...

ಬೆನ್ನು ತಟ್ಟುವರಿಲ್ಲ ಎಂಬ ದುಃಖವಿಲ್ಲ .., ಕಮೆಂಟ್ ಇಲ್ಲೆಂಬ ಬೇಸರವಿಲ್ಲ..., ಓದುಗರಿಲ್ಲೆಂಬ ಚಿಂತೆ ನನಗಿಲ್ಲ.

ನನ್ನ ಬರಹ  ಇಷ್ಟವಿಲ್ಲದಿದ್ದರೆ ನನಗೆ ಅಷ್ಟೇ  .., ಯಾರ ಮನಸು ನೋಯದಿದ್ದರೆ ಅದು ಸಾಕು ನನಗೆ..
  

  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ